ಭಸ್ಮಾಸುರ

ಸ್ಥಿತಿ:
ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ
ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ
ಚಟ್ಟ ಸಾಲು ಸಾಲು.
ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ
ಪಾಲು ಮೂರು ಮುಕ್ಕಾಲು

ಕಾರಣ:
ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ
ಸಂವಿಧಾನಶಿವ ಕೊಟ್ಟುಬಿಟ್ಟ ವರ
ಅಸುರನಿಗೆ ಅವಸರ.

ಪರಿಣಾಮ:
ಉಬ್ಬಿನಲಿ ಉಬ್ಬಾಗಿ ಪೆನ್ನಿನಿಂಕೆಲ್ಲ ಮುಗಿಸಿ ತಬ್ಬಿಬ್ಬಾಗಿ
ಕೈಬಾತುಕೊಂಡು ಕಣ್ ಕಣ್ ಬಿಡುವ ಕಲ್ಲಿನಾಥ!
ವರ ಪಡೆದ ಭಸ್ಮಾಸುರನ ಭಂಡ ನಾಟ್ಯದ ತುಳಿತಕ್ಕೆ
ಹಸಿರ ಬಸಿರೊಡೆದ ಕೆಂಪುಕಾವ್ಯ!

ಮುಂದೆ:
ಬರೀ ಗೋಣು ಹಾಕುತ್ತ ಅಪ್ಪನ ಆಲಕ್ಕೆ ನೇಣು ಹಾಕಿಕೊಳ್ಳುತ್ತ
ಕಂಠಪಾಠದ ಭಂಟರಾಗುವ ಅಂಟುರೋಗ
ಇನ್ನಾದರೂ ಸಾಕಪ್ಪ ಸಾಕು.
ವಿಚಾರಮೋಹಿನಿಯ ಮೋಹಕನಾಟ್ಯ ಮಣ್ಣಮಿಡಿತಕ್ಕೆ
ತಕ್ಕಂತೆ ನಡೆಯಬೇಕು.
ಲಾಯಕ್ಕಾದ ಇಂಕು ಒಗ್ಗುವೌಷಧಿಹಾಕಿ ವಾಸ್ತವ್ಯದ
ಹೊಸ ಜೀವ ತುಂಬಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರೇಕ್ಟನ The Caucasian Chalk Circle
Next post ಸಸ್ಯ ಕಾಸಿಯ ಮ್ಯೂಸಿಯಂ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys